ಮರಣಂ ಶರಣಂ

ದಿನಪತ್ರಿಕೆಯ ಪುಟವ ತಿರುಗಿಸಲು
ಕಾಣುತಿಹವು ಸಾವು
ರೈತರ ಆತ್ಮಹತ್ಯೆ ಸಾವು
ಅಲ್ಲಿ ಸಾಯುವನು ಇಲ್ಲಿ ಸಾಯುವನು
ದಿನವು ಸಾಯುವರು ಮಣ್ಣಿನ ಮಕ್ಕಳು
ದಿನವು ಸಾಯುತಿದೆ ದೇಶದೊಕ್ಕಲು
ಬೆನ್ನೆಲುಬು ಬಾನು ಬಿಕ್ಕಲು
ಬೀಜ ಬಂಜೆಯಾಯಿತೋ ರೋಗ ಮುತ್ತಿತೋ
ಮಳೆಯು ಬಾರದೆ ಒಣಗಿ ಹೋಯಿತೋ
ಅಂತೂ ಇಂತೂ ನೆಲದ ಕಂದರಿಗೆ ಉಳಿವಿಲ್ಲವಾಯಿತೋ
ಸಣ್ಣ ಮಕ್ಕಳಿಗೆ ಕೂಳು ಇಲ್ಲವೋ
ಮನೆಯಲೆಲ್ಲರಿಗೆ ಕಾಳು ಇಲ್ಲವೋ
ಹರಕು ಬಟ್ಟೆಗಳೊ ಮುರುಕು ಜೋಪಡಿಯೋ
ಹೇಗೋ ಏನೊ ರೂಢಿಯಾಯಿತೊ
ಸಾಲ ಶೂಲವದು ಬಂದು ಇರಿವಾಗ
ಹೇಗಿದ್ದರೇನು ಸತ್ತರೇನು
ಸರಿ ಮರಣಂ ಶರಣಂ ಗಚ್ಛಾಮಿ

ಕೇಳದಾಗಿದೆ ಕಿವುಡು ಸರಕಾರ
ಕಾಣದಾಗಿದೆ ಕುರುಡು ದರಬಾರ
ಕೋಟಿಗಟ್ಟಲೆ ಬರ ಪರಿಹಾರ
ಹರಿದು ಬರುತಿದೆ ಯಾರ ಬಾಯಿಗೊ ಯಾರ ಜೇಬಿಗೊ
ಎಲ್ಲಿ ಹೋಗುವುದೊ ಯಾರು ಬಲ್ಲರು?
ಬೆವರ ಹನಿ ಹನಿ ಆವಿಯಾಯಿತು
ಸಾಯುವ ಜೀವಕೆ ಬಾಯಿಯೆ ಇಲ್ಲ
ಅಳುವ ಬಾಯಿಗೆ ದನಿಯೆ ಇಲ್ಲ
ರಾಜಧಾನಿಯಲ್ಲಿ ಹವಾನಿಯಂತ್ರದಿ
ನಿದ್ದೆ ಹೋಗಿಹರು ಮಂತ್ರಿ ದಾನವರು
ದಿನವೂ ಸಾರುತಿದೆ ಪತ್ರಿಕೆ
ರೈತನ ಸಾವು, ಸಾಯುವರು ಸಾಯುವರು

ನೆಲದ ನಿಟ್ಟುಸಿರು ಭೋರೆಂಬ ಗಾಳಿ
ಬರಿದೆ ಬೀಸೇ ಬೀಸುತಿರುವುದು
ಮೋಡದೊಡಲು ಗಡಬಡಿಸುತಿದೆ
ಒಂದೆರಡು ಹನಿ ಉದುರಿಸುತಿದೆ
ಅಶ್ರುತರ್ಪಣ ನಿಷ್ಕಾರಣ |
ಸುದ್ದಿ ಸಾರುವುದು ಪತ್ರಿಕೆ
ಮರುದಿನ ರದ್ದಿ ಅದೇ ಹಳೆ ಸುದ್ದಿ
ದಿನವೂ ಸಾಯುವವರಿಗೆ ಅಳುವವರು ಯಾರು
ಯಾರು ಕೆಡಿಸಿಕೊಳ್ಳುತ್ತಾರೆ ನಿದ್ದಿ
ಮರಣಂ ಶರಣಂ ಗಚ್ಛಾಮಿ

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಫ್ರಿಕಾ
Next post ಜೀವನೋದ್ದೇಶ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

cheap jordans|wholesale air max|wholesale jordans|wholesale jewelry|wholesale jerseys